Sunday 30 December 2012

ಒಂದು ಹೂವು ಅಂದ್ರೆ ಒಂದು ಹೆಣ್ಣು .. !!



ಮೊದಲನೇ ಮಾತು .. ಇದು ಕವನವಲ್ಲ ...
ಕೇವಲ ಮನದಾಳದ ಕೆಲವು ಮಾತುಗಳು ... 

ಸುಂದರವಾದ ಹೂವಿನ ಮಾಲೆ ಸಿಕ್ಕರೆ ..
ಭಕ್ತಿಯಿಂದ ದೇವರಿಗೆ ಹಾಕ್ತೀರೋ ..
ಅಥವಾ
ಪ್ರೀತಿಯಿಂದ ಹೆಂಡತಿಗೆ ಕೊಡ್ತೀರೋ ...
ನಿಮ್ಮಿಷ್ಟ .. 
ಆದರೆ ಸುಂದರವಾಗಿರೋ ಹೂವಿನ ಮಾಲೆಯನ್ನ
ಹರಿದು ಹಿಸುಕಿ ತುಳಿದು ಹಾಳ್ ಮಾಡೋದ್ ತುಂಬಾ ತಪ್ಪು ..

ಪುಟ್ಟ ಪುಟ್ಟ ಹೂವುಗಳನ್ನ
ತುಂಬಾ ಜೋಪಾನವಾಗಿ
ಮಾಲೆ ಕಟ್ಟಿ ಕಷ್ಟ ಪಟ್ಟು ಜೀವನ ಮಾಡೋ ..
ಜನರು ನಂಬಿರೋದು ಆ ಪುಟ್ಟ ಪುಟ್ಟ ಹೂವುಗಳನ್ನೇ ... 

ಇಲ್ಲಿ ಇನ್ನೊಂದು ರೀತಿ ಯೋಚನೆ ಮಾಡಿ ..
ಚಿಕ್ಕವರಿಗೂ ಸುಲಭವಾಗಿ ಅರ್ಥ ಆಗಲಿ ಅಂತಾ ಸರಳವಾಗಿ ಬರೆದಿದ್ದೇನೆ ..
ಪ್ರೀತಿಯಿಂದ ನೋಡ್ಕೊಂಡ್ರೆ ಆ ಹೂವಿನ (ಹೆಣ್ಣಿನ) ಆಯುಷ್ಯ ತುಂಬಾ ಕಾಲ ..
ಒಂದು ಹೂವು ಸುಂದರವಾಗಿ ಕಾಣೋದಷ್ಟೇ ಅಲ್ಲಾ 
ನಮ್ಮ ನಿತ್ಯ ಬದುಕಿನಲ್ಲಿ ಆರೋಗ್ಯಕರವಾಗಿ ಬದುಕಲು ಸಹಾಯ ಆಗುತ್ತೆ .. 
ಹೂವಿನ ಜೊತೆಯಲ್ಲಿ ಹೆಚ್ಚಾಗಿ ಹಸಿರು ಇರುತ್ತೆ .. 
ಆ ಹಸಿರು ನಮ್ಮ ಬದುಕಿನ ಉಸಿರು .. !!

ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ .. !!!!!!



ಕೆಲವು ಸಾರಿ ತುಂಬಾ ಸಿಟ್ಟು
ಕೆಲವು ಸಾರಿ ತುಂಬಾ ಬೇಸರ
ಕೆಲವು ಸಾರಿ ತುಂಬಾ ಆತುರ
ಕೆಲವು ಸಾರಿ ತುಂಬಾ ಚಿಂತೆ
ಕೆಲವು ಸಾರಿ ತುಂಬಾ ಖುಷಿ

ಕೆಲವು ಸಾರಿ ಇನ್ನೂ ಏನೇನೋ ಆಗುತ್ತೆ
ಯಾವುದಕ್ಕೆ ಇದೆಲ್ಲಾ ಹೀಗೆಲ್ಲಾ ಅಂದ್ರೆ 
ಅದು ಒಂದೇ ವಿಚಾರ ತುಂಬಾ ಕಾಡುತ್ತೆ
ಯಾಕೆಲ್ಲಾ ಕ್ಷಣ ಕ್ಷಣ ಹೀಗಾಗುತ್ತೆ ಅಂದ್ರೆ
ಬಣ್ಣ ಬಣ್ಣದ ಕನಸುಗಳು ಮಾಯವಾಗಿರುತ್ತೆ
~~~~~~~~~~~~~~~~~~~~~~~~~~~~~~
ಪ್ರತಿಭಟನೆ ಮಾಡಬೇಕು ಅಂತಾ ಕಪ್ಪು ಬಣ್ಣ ಬಳಸ್ತಾರೆ .. ಆದ್ರೆ ಅದರ ಜೊತೆ ನಮ್ಮ ಮನದಲ್ಲಿ ಉಂಟಾಗುವ ವಿಭಿನ್ನ ಭಾವನೆಗಳನ್ನ ಒಂದೊಂದು ಬಣ್ಣದಲ್ಲಿ ಪ್ರತಿಬಿಂಬಿಸಿದಾಗ, ಅಲ್ಲಿ ಕೋಪದ ಕೆಂಪು , ಶಾಂತಿಯ ಬಿಳಿ , ಭಯದ ಕಪ್ಪು , ಬೇಸರದ ನೆರಳಿನಂತೆ ಬೂದು , ಆಸೆಯ ಆಗಸದಂತೆ ನೀಲಿ , ಸಂತಸದ ಹಸಿರು , ಭೂಮಾತೆಯ ಭಕ್ತಿ ಗೌರವದಲ್ಲಿ ಕಂದು .... ಹೀಗೆ ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ ಕಳೆದು ಹೋಗುತ್ತೆ .. ಏನೂ ಇಲ್ಲಾ ಅಂತಾ ಅಂದ್ರೆ ಜೀವನವೇ ಕಪ್ಪಾಗಿ ಕಾಣುತ್ತೆ... ಸ್ವಲ್ಪ ಸ್ವಲ್ಪ ಆಸೆಗಳು, ಕನಸುಗಳು ನಿಜವಾಗೋ ಕಾಲ ಬಂದ್ರೆ ಬದುಕಲ್ಲಿ ಹಸಿರು ನೀಲಿ ಬಿಳಿ ತುಂಬಾ ಇಷ್ಟ ಆಗುತ್ತೆ .. ಆದರೆ ಈ ಅನ್ನೋದು ಪ್ರೀತಿಗೂ ಸರಿ ದ್ವೇಷಕ್ಕೂ ಸರಿ .. ಹಲವಾರು ಜನಗಳ ವಿಭಿನ್ನ ಅನಿಸಿಕೆಗಳ ನಡುವೆ ನಿಜವಾದ ನ್ಯಾಯ ಮರೆಯಾಗಿ ಹೋಗ್ತಿದೆ.. !!

Sunday 15 July 2012

ಎಲ್ಲಿದೆ ಆ ಹನಿ ಹನಿ ಜೇನ ಹನಿ ... ಅದೆಲ್ಲಿರುವನೋ ಮಳೆರಾಯ .. !!

ಮೇಲೊಂದು ಕೆಳಗೊಂದು ರೈಲ್ ಬಿಡೋಕ್ಕೆ ...
ಪಕ್ಕಪಕ್ಕದಲ್ಲೆ ನಾಲ್ಕ್ ಗಾಲಿ ಗಾಡಿಗಳು ರೇಸ್ ಆಡೋಕ್ಕೆ...
ನಾಲ್ಕ್ ನಿಮಿಷ ಕೂತು ಟೀ ಕಾಫಿ ಕುಡಿಯೋಕ್ಕೆ ಅರಮನೆ ಅಷ್ಟು ಜಾಗ...
ಊರು ಉದ್ದಾರ ಅನ್ನೋ ನೆಪದಲ್ಲಿ ಹೊಲಾನೆಲ್ಲಾ ಹಾಳ್ ಮಾಡಿ ಕಳ್ಳಾಸ್ತಿ... ಸುಳ್ಳಾಸ್ತಿ .. ಅಂತಾ ಹೆಸರಿಗೊಂದಿಷ್ಟು , ಹಂಚೋಕೊಂದಿಷ್ಟು ..
ಇನ್ನೂ ಅದೆಲ್ಲಿ ಉಳಿಯುತ್ತೆ ಹರಿಸು .. ಅದುವೇ ಮಳೆರಾಯನ ಕೈ ಬೀಸಿ ಕರೆಯೋ ಉಸಿರು .. 
ಅಜ್ಜಿ ಕಥೆ ಅಂತಾ ಅದು ಇದು ಕೇಳಿ ಅಚಾರ ಮಾಡೋ ಕಾಲಕ್ಕೆ  ಸರಿಯಾಗಿ ಟೈಮ್ ಪಾಸ್ ಆಗಿ ಅದೆಲ್ಲೋ ಹನಿ ಉದುರುತ್ತೆ ಅಂದ್ರೆ .. ನಾ ಮಂತ್ರ ಊದಿದ್ದು ಆ ಮಳೆ ಉದುರೋಕ್ಕೆ ಅಂದ್ರೆ .. ಅದೆಂಗೆ ಜನ ತಲೆ ಅಲ್ಲಾಡಿಸ್ತಾರೋ ದೇವರೇ ಬಲ್ಲ... 
ಮಳೆ ಬರೋಕ್ಕೆ ಏನೇನೋ ಮಾಡಬೇಕಾ ... ಭೂಮಿಯಿಂದ ನೀರು ಆವಿ , ಆಮೇಲೆ ಮೋಡ , ಅದು ನಂತರ ಮಳೆ .. 
ಆದರೆ ಇಲ್ಲಿ ಭೂಮಿಯಲ್ಲಿ ಆ ನೀರೆ ಇಲ್ಲಾ.... ಊರ ಮಧ್ಯೆ ಫಾರಿನ್ ಕಂಪನಿ ಬಿಸಿನೆಸ್ ಮಾಡೋಕ್ಕೆ ಕೆರೆ ಮುಚ್ಚಿ ಬಿಲ್ಡಿಂಗ್ ಎಬ್ಬಿಸಿ .. ಬಾ ಬಾ ಮಳೆಯೇ ಅಂದ್ರೆ ಅದೆಲ್ಲಿ ಅಂತಾ ಬರಬೇಕು... ಮೇಲಿಂದ ಆ ಮಳೆರಾಯ ನೋಡ್ತಾನೆ ಹಸಿರು ಬಣ್ಣ ಅಲ್ಲಾಡ್ತಾ , ಒಲಾಡ್ತಾ ಇದ್ರೆ ಸಾಕು , ಆ ಜಾಗಕ್ಕೆ ಹೋಗಿ ಬೀಳ್ತಾನೆ .. ಗಾಳಿ ಬೀಸಿದಲ್ಲಿ ಗಾಳಿಪಟ .. ಗಾಳಿ ಎಳೆದಲ್ಲಿ ಹನಿಹನಿ ಅಮೃತ .. ಆ ಗಾಳಿ ಓಡಲು , ಹಾರಲು ದಿಕ್ಕು ಬದಲಿಸಿ ಕಾರಣವು ಹರಿಸು ತೂಗಿ ಕೂಗುವ ವಿಸ್ಮಯವು .. :)ಅರಿತವರಿಗದು ಅಚ್ಚರಿಯ ಸಂಗತಿ ಏನಲ್ಲಾ .. ಆದರೆ ಅರಿತು ಅದರ ಕುರಿತು ಅನುಮಾನಿಸುವುದೇ ಅಲ್ಲಿ ಇಲ್ಲಸಲ್ಲದ ಆಚಾರಗಳ ಹುಟ್ಟಿನಲ್ಲಿ ಒಂದು ಸಂಪ್ರದಾಯವನ್ನೇ ಸೃಷ್ಟಿಸುತ್ತದೆ... ಇದರಿಂದ ಯಾರಿಗೆ ಅದೆಷ್ಟು ಪ್ರಯೋಜನ ಎಂಬುದು ಇನ್ನೂ ತಿಳಿದು ಸಹ ಯಾರು ತಿಳಿಯದಂತಹಾ ವಿಷಯ ವಿಚಾರವಾಗಿ ಕಾಣಿಸುವುದಲ್ಲದೆ ... ಸತ್ಯವನ್ನು ಮರೆಮಾಚುವಂತೆ ಮಾಡುತ್ತಿದೆ..

(ಅವಶ್ಯವೆನ್ನಿಸಿದರೆ ಈ ವಿಚಾರದಲ್ಲಿ ಮತ್ತೆ ಹಲವು ಮಾತುಗಳನ್ನು ಮುಂದುವರೆಸುತ್ತೇನೆ.....)

ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...

ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...
ಮುಂದೇನು ಎನ್ನುವುದನ್ನು ತಿಳಿಯುವುದು ಕಷ್ಟ...
ಹಿಂದೆನಿತ್ತು ಎನ್ನುವುದು ಸಹ ಅಷ್ಟೇ ಅಚ್ಚರಿಯನ್ನು ಕೊಡುತ್ತದೆ...

ಒಂದು ರೀತಿಯಲ್ಲಿ ಯಾವುದನ್ನು ಯಾರು ಬರೆಯುತ್ತಾರೋ ಅದು ನಿಜ
ಮತ್ತು ಅದಕ್ಕಷ್ಟೇ ಆಧಾರಗಳನ್ನು ಹುಡುಕಿ ಅದು ನಿಜವೋ ಅಲ್ಲವೋ ..
ಎನ್ನುವ ಸಂಶೋಧನೆಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ...
ಯಾವುದೋ ಒಂದು ಬೆಟ್ಟದಡಿಯಲ್ಲಿ ಹಳೆಯ ಅರಮನೆ ಹೂತು ಹೋಗಿದೆ
ಮತ್ತು ಅಲ್ಲಿ ಯಾರ ಆಳ್ವಿಕೆ ಇತ್ತು ಹಾಗೂ ಎಷ್ಟು ವಜ್ರ , ಚಿನ್ನ , ಬೆಳ್ಳಿ , ಮುತ್ತುರತ್ನ ಹವಳದ ಒಡವೆಗಳು ಈಗಲೂ ಸಿಗುತ್ತದೆ ಎಂದರೆ .. ಆ ಬೆಟ್ಟವನ್ನೇ ಕಡಿದು , ಪುಡಿ ಪುಡಿ ಮಾಡಿ , ಕೊನೆಯಲ್ಲಿ ಏನೂ ಸಿಗದಿದ್ದರೂ ಸಹ ಕಟ್ಟಡಗಳಿಗೆ ಕಲ್ಲಾದರೂ ಸಿಕ್ಕಂತೆ ಆಗಲಿ ಎನ್ನುವ ಆಲೋಚನೆಯಲ್ಲಿ ಎಲ್ಲಾ ಬೆಟ್ಟಗುಡ್ಡಗಳ ಕಡಿದು ಹಾಕಿ , ನಿಜವಾದ ಇತಿಹಾಸವನ್ನೇ ಸ್ವಾರ್ಥ ಲಾಭಕ್ಕಾಗಿ ಸಂಶೋಧನಾ ಕಾರ್ಯದಲ್ಲಿ ರಾಜಕೀಯ ನಡೆಸುವ ಕಾಲವಿದು .. ಇಲ್ಲಿ ನಾವು ಏನನ್ನು ಓದಬೇಕು ಎಂದು ಆಲೋಚಿಸುತ್ತೆವೋ ಅದು ಶಾಲಾಕಾಲೇಜು ಪಠ್ಯಕ್ರಮದಲ್ಲಿ ಕೇವಲ ಪರಿಚಯ ಮಾಡಿಸುವ ವಿಷಯವಾಗಿ ಮಾತ್ರವೇ ಇರುತ್ತದೆ.. ಸಂಪೂರ್ಣ ಮಾಹಿತಿ ಅನ್ನೋದನ್ನು ಬೇರೆ ಕಡೆಯೇ ಪಡೆಯಬೇಕು .. 
ಕಾರಣ ಇತಿಹಾಸವೂ ಒಂದು ರೀತಿಯಲ್ಲಿ ಆಕರ್ಷಣೆಯ ವಿಚಾರ .. ಕೆಲವರಿಗೆ ರಾಜ ಮಹಾರಾಜರ ಕಥೆಗಳು ಬೇಕು , ಕೆಲವರಿಗೆ ದೇವಾಲಯಗಳು ಮತ್ತು ನೃತ್ಯಗಾರ್ತಿಯರ ಕಥೆಗಳು ಬೇಕು , ಇನ್ನೂ ಕೆಲವರಿಗೆ ಇತಿಹಾಸದಲ್ಲಿ ಕಳೆದು ಹೋಗಿದೆ ಎನ್ನುವ ವಸ್ತುಗಳ ಹುಡುಕುವ ಕಾರ್ಯದಲ್ಲಿ ಆಸಕ್ತಿ , ಮತ್ತೆ ಹಲವರಿಗೆ ಇತಿಹಾಸದ ರಾಜಕೀಯ ಬೇಕು , ಹಾಗೆಯೇ ಕೆಲವು ವಿಚಿತ್ರ ಘಟನೆಗಳ (ದೆವ್ವ , ಭೂತಗಳ , ಮಾಟ ಮಂತ್ರ ಯಂತ್ರ ತಂತ್ರಗಳ) ತಿಳಿಯುವ ಕೋರಿಕೆ.. , ಇನ್ನೂ ಹಲವರಿಗೆ ಇತಿಹಾಸದಲ್ಲಿ ವಿಜ್ಞಾನದ ಪಾತ್ರ ಏನು .. , ಅದೇ ರೀತಿ ಇತಿಹಾಸದಲ್ಲಿ ಸಾಹಿತಿಗಳ , ಸಾಹಿತ್ಯದ (ವಿವಿಧ ಭಾಷೆಗಳು) ಹುಟ್ಟು ಮತ್ತು ಬೆಳವಣಿಗೆಯ ಹಂತ ಹಂತದ ಬದಲಾವಣೆ .. ಇದನ್ನೆಲ್ಲಾ  ಯಾರಿಗೆ ಎಷ್ಟು ಆಸಕ್ತಿಯೋ , ಅದಕ್ಕೆ ಅನುಗುಣವಾಗಿ ಪಠ್ಯಕ್ರಮ ಸಿದ್ಧವಾಗುತ್ತದೆ .. ಯಾವುದೇ ವಿಚಾರವನ್ನು ಸತ್ಯ ಎಂದು ಹೇಳಿದಾಗ ಅಲ್ಲಿ ಒಂದು ಸಣ್ಣ ಸುಳ್ಳು ನಮಗರಿವಿಲ್ಲದಂತೆ ಸೇರಿರುತ್ತದೆ .. ಆದರೆ ಅದನ್ನು ಊಹೆಯ ಸತ್ಯ ಮತ್ತು ಸಂಶೋಧನೆಯ ಮಾಡಲು ಒಂದು ಆರಂಭ ಆಧಾರ ಎಂದು ಪರಿಗಣಿಸಿ ಒಪ್ಪಲೇಬೇಕಾಗುತ್ತದೆ .. ಅದುವೇ ಇತಿಹಾಸ ಮತ್ತು ಬದಲಾವಣೆ ಭವಿಷ್ಯ .. :)

ಬದರಿನಾಥ್ ಪಲವಳ್ಳಿಯ ನೋಟ್ ಬುಕ್...: ದಾವಣಗೆರೆಯಿಂದ...

ಬದರಿನಾಥ್ ಪಲವಳ್ಳಿಯ ನೋಟ್ ಬುಕ್...: ದಾವಣಗೆರೆಯಿಂದ...: ದಾವಣಗೆರೆಯ ಬ್ಲಾಗ್ ಮಿತ್ರ ಅಕ್ಕರೆಯಿಂದ ಕೊಟ್ಟ ಪ್ರಶಸ್ತಿ ಪತ್ರ: "ನೆನಪುಗಳ ನೆನಪು ಸದಾ ನೆನಪಾಗಿರಲು" ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ ನೀವು ಬಿಡುವ ಅಪರೂಪದ ಪ...

Friday 22 June 2012

ಒಂದು ವರ್ಷದ ಸರ್ಕಾರಿ ಶಾಲೆ (A year in government school)

ಒಂದು ವರ್ಷದ ಸರ್ಕಾರಿ ಶಾಲೆ (A year in government school)
***************************************************************
ಇದು ನಿಜ.. ಅದೇನೆಂದರೆ ನಾವು ಹುಬ್ಬಳ್ಳಿಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದೋವಾಗ ನಮಗೆಲ್ಲಾ ಒಂದು ಪುಸ್ತಕವನ್ನೇ ಮಾಡಿಸಿದ್ದರು .. ಅದಕ್ಕೆ ಹೆಸರು ಒಳ್ಳೆಯ ಕೆಲಸ .. ನಾವು ಆ ದಿನ ಮಾಡಿದ ಒಳ್ಳೆಯ ಕೆಲಸವನ್ನು ಅದರಲ್ಲಿ ಬರಿಯಬೇಕಿತ್ತು .. ಯಾವುದೇ ದಿನ ತಪ್ಪಿದರೂ ಆ ದಿನ ಮೇಷ್ಟ್ರು ತುಂಬಾ ಬೈಯುತ್ತಿದ್ದರು.. ಆದರೆ ಅದರಲ್ಲಿ ಮತ್ತೊಂದು ವಿಶೇಷ ಅಂದರೆ ನಮ್ಮ ಶಾಲೆಯಲ್ಲಿ ಚುನಾವಣೆ ಅಂತಾ ಮಾಡಿ , ಅದರಿಂದ ವಿದ್ಯಾರ್ಥಿ ನಾಯಕ ಮತ್ತು ನಾಯಕಿ ಅಂತ ಇಬ್ಬರನ್ನು ಆಯ್ಕೆ ಮಾಡ್ತಾ ಇದ್ರೂ .. ಆಗ ಮೊದಲ ಎರಡು ತಿಂಗಳು ಹುಬ್ಬಳ್ಳಿ ಊರು ಮತ್ತು ಶಾಲೆ ಹೊಸದು ಆದ್ದರಿಂದ ಸುಮ್ಮನೆ ಗೆಳಯರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕಿದ್ವಿ .. ಹೀಗೆ ದಿನಗಳು ಉರುಳಿದಂತೆ ಒಂದು ದಿನ ಆಶುಭಾಷಣ ಸ್ಪರ್ಧೆ ಅಂತಾ ನಡಿತು .. ಅದರಲ್ಲಿ ಶಾಲೆಯ ಆಟದ ಮೈದಾನ ಅನ್ನೋದು ಚೀಟಿಯಲ್ಲಿ ಸಿಕ್ಕ ವಿಷಯ .. ಅದಕ್ಕೆ ಐದು ನಿಮಿಷ ಮಾತಾಡಿದ್ದು ಕೇಳಿ ಕೆಲವು ಸ್ನೇಹಿತರು ನಮಗೇನು ಹೇಳದೆ ಚುನಾವಣೆಯಲ್ಲಿ ನಮ್ಮ ಹೆಸರು ಅಭ್ಯರ್ತಿಯಾಗಿ ಸೇರಿಸಿದ್ದಾರೆ.. ಆಗ ಬೇಡ ಅಂತಾ ಹೇಳಿ ನಮ್ಮ ಮೇಷ್ಟ್ರಿಗೆ ಹೇಳಿದ್ದಕ್ಕೆ ಹಾಗೆಲ್ಲಾ ವಾಪಾಸ್ಸು ತೆಗೆಯೋ ಹಾಗಿಲ್ಲಾ ಅಂದರು .. ನಾನು ಸಹ ಸುಮ್ಮನಾದೆ .. ಆದರೆ ಅದು ಒಂದು ಓಪನ್ ಎಲೆಕ್ಷನ್ .. ನಮ್ಮ ನೇಮ್ ಬೋರ್ಡ್ ಮೇಲೆ ಇರುತ್ತೆ .. ಅದರ ಕೆಳಗೆ ಒಬ್ಬೊಬ್ಬರೇ ಬಂದು ಒಂದು ಗೆರೆ ಹಾಕಬೇಕು (ಒಂದು ಅಂತ ಬರೀಬೇಕು) ಆಗ ಮೊದಲು ಹತ್ತು ಓಟ್ ಆಗೋವರೆಗೂ ನಮ್ಮ ಹೆಸರಿನ ಕೆಳಗೆ ಇದ್ದದ್ದು ಮೂರು ಮತ್ತು ನಮ್ಮದೊಂದು ಓಟ್ .. ಒಟ್ಟು ನಾಲ್ಕು ಮತಗಳು.. ಹಾಗೆಯೇ ಅದು ಮುಂದೆ ಮುಂದೆ ಸಾಗಿ ಮೂವತ್ತು ಓಟ್ ಮುಗಿದರೂ ಸಹ ನಾಲ್ಕೇ ಆಗಿತ್ತು .. ಇನ್ನೂ ಒಂದು ವಿಶೇಷ ಅಂದರೆ ನಮಗೆ ಎಲೆಕ್ಷನ್ ಅಲ್ಲಿ ನಿಲ್ಲೋಕ್ಕೆ ಇಷ್ಟ ಇಲ್ಲದೆ ಕಾರಣ ಬೇರೆಯವರಿಗೆ (ಅಂದರೆ ಹಿಂದಿನ ತಿಂಗಳು ಗೆದ್ದವರಿಗೆ) ಓಟ್ ಮಾಡೋಕ್ಕೆ ಹೋದರೆ , ನಮ್ಮ ಮೇಷ್ಟ್ರು ಹೇಳಿದ್ದು ಆ ರೀತಿ ಓಟ್ ಬೇರೆಯವರಿಗೆ ಹಾಕೋ ಹಾಗಿಲ್ಲಾ ಅಂತಾ.. ಅದಕ್ಕೆ ನಾವೇ ನಮ್ಮ ಹಾಕ್ಕೊಂಡಿದ್ದು .. ಅದು ಎಲ್ಲಾ ಮತದಾನ ಮುಗಿಯುವ ಅಷ್ಟೊತ್ತಿಗೆ ಒಂದು ಆಶ್ಚರ್ಯ ನಮಗಾಗಿ .. ಅದು ನಲವತ್ತಾರನೇ ಓಟ್ ಇಂದ ಎಲ್ಲ ಹುಡುಗ/ಹುಡುಗಿಯರು ನಮ್ಮ ಹೆಸರಿನ ಕೆಳಗೆ ಓಟ್ ಹಾಕಿದ್ದು.. ಅಲ್ಲಿಂದ ಇನ್ನೂರ ಮೂವತ್ತೆರಡು ಮತಗಳ ಅಂತರದಲ್ಲಿ ಗೆದ್ದ ನಂತರ ಆರು ತಿಂಗಳು ನಮ್ಮನ್ನೇ ಆಯ್ಕೆ ಮಾಡಿ ಗೆಲ್ಲಿಸುತ್ತಿದ್ದರು .. ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಹೋದ ನಾವು ಅಲ್ಲಿ ಇದ್ದದ್ದು ಎಂಟು ತಿಂಗಳು ಮಾತ್ರ .. ಹಾಗೂ ನಂತರದಲ್ಲಿ ರಾಣೆಬೆನ್ನೂರಿಗೆ ಬಂದೆವು .. ಅಲ್ಲಿಯೂ ಸರ್ಕಾರಿ ಶಾಲೆ ಹಾಗು ಅಲ್ಲಿಯೂ ಮತ್ತೆ ಒಂದು ತಿಂಗಳಾದ ಮೇಲೆ ವಿದ್ಯಾರ್ಥಿ ನಾಯಕ ಪಟ್ಟ.. ಇಷ್ಟು ಕಥೆ ನಮ್ಮ ಶಾಲಾ ದಿನಗಳ ಆ ಸವಿನೆನಪುಗಳನ್ನು ಮತ್ತೊಮ್ಮೆ ಒಂದು ನೈಜ ಕಥೆಯನ್ನಾಗಿ ಎಲ್ಲರ ಮುಂದೆ ತರಲು ಕಾರಣರಾದ ನಮ್ಮ ಸ್ನೇಹಿತರೊಬ್ಬರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ.. ಹಾಗೂ ಇದರಲ್ಲಿ (ಕಥೆಯಲ್ಲಿ) ಕೆಲವು ಮುಖ್ಯ ಅಂಶಗಳನ್ನು ಮತ್ತೊಂದು ಕಥೆಯಾಗಿ ಹೇಳುತ್ತೇವೆ... ಹಾಗೂ ಈ ಕಥೆಯಲ್ಲಿ ಆಸಕ್ತಿ ಹುಟ್ಟಿಸುವ ಅಂಶಗಳು ಏನೂ ಇಲ್ಲ.. ಇದೆಲ್ಲಾ ಕೇವಲ ನೆನಪುಗಳು (ಕಥೆಯ ಆರಂಭವಷ್ಟೇ) .. ಮಾತನಾಡುವ ಭಾಷೆ ಬದಲಾಗಿ , ವಾಸ ಮಾಡುವ ಸ್ಥಳವು ಬದಲಾಗಿ ಮರೆಯಲಾಗದ ಆ ಒಂದು ವರ್ಷ .. ಹೌದು ಅದು ನಾವು ಸರ್ಕಾರಿ ಶಾಲೆಯಲ್ಲಿ (ಹುಬ್ಬಳ್ಳಿ ಮತ್ತು ರಾಣೆಬೆನ್ನೂರು) ಕಲಿತ ದಿನಗಳ ಕಥೆಯು.. ನಮ್ಮ ಮನದಾಳದ ಮಾತುಗಳಿಗಾಗಿ ಮಾಡಿರುವ "ವಿಶೇಷ ಬರಹಗಾರ" ಬ್ಲಾಗ್ ಅಲ್ಲೂ ಸಹ ಪ್ರಕಟಿಸುತ್ತೇವೆ.. & ಇದರಲ್ಲಿ ಕೆಲವು ಲವ್ ಸ್ಟೋರಿಗಳು , ಸೆಂಟಿಮೆಂಟ್'ಗಳು , ಸಸ್ಪೆನ್ಸ್ , ಅಧ್ಯಾತ್ಮ , ಸ್ಪೋರ್ಟ್ಸ್ ... ಎಲ್ಲಾ ಸೇರಿದ ಒಂದು ಸಿನಿಮಾ ಕಥೆಯಾಗಿ ಆಗಬಹುದು .. ಹಾಗೂ ಕೆಲವರಿಗಂತೂ ಸವಿ ಸವಿ ನೆನಪು ಅಂತಾ "ಮೈ ಆಟೋಗ್ರಾಫ್" ಕನ್ನಡ ಚಲನಚಿತ್ರದ ನೆನಪು ಆಗಬಹುದು .. ಕೊನೆಯಲ್ಲಿ ನಾಯಕನಿಗೆ ಮದುವೆ ಆಗುತ್ತೆ .. ಆದರೆ ನಾ ಹೇಳುವ ಕಥೆಯು ಸಂಪೂರ್ಣ ಸ್ವಂತದ್ದು ಮತ್ತು ಈ ಕಥೆಯಲ್ಲಿ ನಾಯಕನಿಗೆ ಇನ್ನೂ ಮದುವೆ ಆಗಿಲ್ಲ.. ಇದು ಒಬ್ಬ ಸ್ನೇಹಿತರು ನೆನಪು ಮಾಡಿಸಿದ ಕಥೆ .. ಸ್ವಂತ ಅನುಭವಗಳ ಒಂದು ವರ್ಷದ ಸರ್ಕಾರಿ ಶಾಲೆಯ ಮತ್ತು ಸ್ನೇಹಿತರ ಕಥೆ.. :)
ದಯವಿಟ್ಟು ಕಾದು ನೋಡಿ ... ಆಮೇಲೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .. ಸತ್ಯವನ್ನು ಬರೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ ಆದರೆ ಈ ಮೊದಲೇ ಆರಂಭಿಸಿದ "ನಾನು ನನ್ನ ಕವನ" ಎಂಬ ಕಾಲ್ಪನಿಕ ಕಥೆಯ ಮುಗಿಸಿದ ನಂತರ , ಈ ಕಥೆಯನ್ನು ಪ್ರಾರಂಭಿಸುತ್ತೇವೆ .. ಎಲ್ಲರಿಗೂ ಶುಭವಾಗಲಿ .. 
* ಓಂ ಶ್ರೀ ಗಣೇಶಾಯ ನಮಃ *

Sunday 17 June 2012

ಚಿತ್ರಮಂದಿರಗಳು ಸಮಸ್ಯೆಗಳು



ಹೆಚ್ಚಿನ ಚಲನಚಿತ್ರಗಳ (ಉತ್ತಮ ಚಿತ್ರಗಳ) .......
ಸೋಲು (ಜನ ಮನ್ನಣೆ ಅಥವಾ ಪ್ರೋತ್ಸಾಹ ಸಿಗದಿರುವುದು) ...........

ಇದಕ್ಕೆ ಒಂದು ರೀತಿಯಲ್ಲಿ ಚಿತ್ರಮಂದಿರಗಳು ಸಹ ಕಾರಣವಾಗುತ್ತಿವೆ..
ಚಿತ್ರಮಂದಿರಗಳ ಶುಚಿತ್ವ , ನೀರಿನ ವ್ಯವಸ್ಥೆ , ಆಸನಗಳ (ಚೇರುಗಳ) ಗುಣಮಟ್ಟವೂ ಸಹ ಹಾಗೂ ಜೊತೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್ ) .... ಇನ್ನೂ ಅನೇಕ ರೀತಿಯ ಸಮಸ್ಯೆಗಳು ಜನರನ್ನು ಇತ್ತೀಚಿಗೆ ಚಿತ್ರಮಂದಿರಗಳತ್ತ ಹೋಗುವುದೋ ಬೇಡವೋ ಎಂದು ಆಲೋಚಿಸುವಂತೆ ಮಾಡಿದೆ.. ಇದಕ್ಕೆಲ್ಲಾ ಬೇಗನೆ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಚಿತ್ರಮಂದಿರಗಳತ್ತ ಜನರನ್ನು ಕರೆತರುವುದು ತುಂಬಾ ಕಷ್ಟವಾಗಬಹುದು .. ಒಮ್ಮೆ ಎಲ್ಲರೂ ಇದರ ಬಗ್ಗೆ ಆಲೋಚಿಸಿ ಎಂದು ನಮ್ಮ ಅನಿಸಿಕೆ + ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇವೆ.. :)

ಎಲ್ಲರಿಗೂ ಒಳ್ಳೆಯದಾಗಲಿ .....
* ಓಂ ಶ್ರೀ ಗಣೇಶಾಯ ನಮಃ *

|| ಪ್ರಶಾಂತ್ ಖಟಾವಕರ್ ||